ಕಡಿವಾಣವ ಹಾಕಲು ಎಲ್ಲಿ ಹೂಡಲಿ ಕನ್ನ?
ಚಂಚಲತೆಗೆ ಮನಸೋತು ಕೆಲಸವೆಲ್ಲ ಅಸ್ತವ್ಯಸ್ತವೆನಿಸಿದೆಯೆನ್ನ,
ನಾನೀಗ ಎಲ್ಲಿ ನಿಲ್ಲಿಸಲಿ ನಿನ್ನ?
ನೀ ಹೋಗಿಬಾ ಎಲ್ಲಿ ಬೇಕೆಂದರಲ್ಲಿ, ನಾ ಬರಲಾರೆ ಜೊತೆಗೂಡಿ ನಿನ್ನ,
ಹೇಗೆ ತಿದ್ದಲಿ ನಿನ್ನ, ನೀ ಬರಲಾರೆ ಜೊತೆಗೂಡಿ ಎನ್ನ.
ನಿಂತಲ್ಲಿ ನಿಲ್ಲಲಾರೆ ನೀ, ಕೂತಲ್ಲಿ ನೀನಿರಲಾರೆ, ತಿರುಗುತ್ತಿರುವೆ ನೀನುಇದೇನು ಚೆನ್ನ?
ಯಾವುದೋ ನೆನಪನ್ನು ಮೆಲುಕು ಹಾಕುತ್ತಿರುವೆ, ನಾನ್ಯಾಕೆ ಮುಂದೆ ನಿನ್ನ?
ಅಡಗಿ ಕುಳಿತಿರುವ ಮನಸ್ಸು ಯಾವುದೋ ಲೋಕಕ್ಕೆ ಕೊನ್ದೊಇಯುವುದು ಎನ್ನ,
ಬಲು ತೀಕ್ಷ್ಣತೆಯ ನೋಟವನ್ನು ಎನಗೆ ನೀನಿತ್ತು ನೋಯಿಸುವೆಯಾ ನನ್ನ?
ಸಹನೆಯದು ಬಹುದೊಡ್ಡ ಗುಣ ಅದನಿತ್ತು ಸಹಕರಿಸುವೆಯಾ ಮನವೇ ಎನ್ನ?
ಸಹಿಸುವಾ ಶಕ್ತಿಯದು ಸಹನೆ, ಕಳೆದು ಕೊಲ್ಲದಿರಿ ನೀವು ನಿಮ್ಮತನವನ್ನು,
ಬಲಿಷ್ಠ ಮನವದು ಶ್ರೇಷ್ಟ ಶಕ್ತಿಯು ಮನುಜನಿಗೆ ವರದಾನ,
ದುರ್ಬಲ ಗೊಲಿಸದಿರಿ ಸದ್ಯದಲಿ ಇದರ ಶಕ್ತಿಯನು.
ಮನದಾಳವನು ತೆರೆದು ಚೆಲ್ಲಿ, ಇದರಲಿ ದಿವ್ಯೌಶದವು ಲಭಿಸುವುದು,
ಪರಿಶುದ್ಧ್ಹ ಗೊಳಿಸುವುದು ನಿಮ್ಮ ಮನದಾಳವದು ನಿರ್ಮಲಗೊಳ್ಳುವುದು,
ಸಕಲ ಚಿಂತೆಯನು ಬಿಟ್ಟು ಇರಬಹುದು ನೀವೆಂದೆಂದು
ನಿಶ್ಚಿಂತೆಯನು ಪಾಲಿಸಿರಿ ಮನದೊಳಗೆ ಇನ್ನೆಂದು.
-- ಪುಷ್ಪತಾರ ದೇವದಾಸ್ ಉಚ್ಚಿಲ್
ಬೆಂಗಳೂರು/ಮಂಗಳೂರು.
Kannada poems by my Mom
Sunday, May 15, 2011
Monday, April 4, 2011
ಯುಗಾದಿಯ ಶುಭಾಶಯಗಳು!
ಹಸಿರಾಗಲಿ ನಿನ್ನ ಬಾಳು ಯುಗಾದಿಯ ಈ ಸಂಭ್ರಮದಲ್ಲಿ ನೋವೆಲ್ಲ ಬತ್ತು ಹೋಗಿ ಸಂತೋಷದ ಕಾರಂಜಿ ಹೊಮ್ಮಲಿ...!
ವಾರ್ಷಿಕೋತ್ಸವ
ಬಂದಿತು, ಬಂದಿತು ವಾರ್ಷಿಕೋತ್ಸವವು,
ಯಾರೂ ಮುಟ್ಟಿ ನೋಡದ ಗೋಡೆಗೆ ಬಣ್ಣದ ಅಪ್ಪುಗೆಯು,
ಎಲ್ಲಿಲ್ಲದ ಸಂಭ್ರಮ - ಸಡಗರ ಎಲ್ಲೆಡೆಯು;
ತಳಿರು - ತೋರಣಗಳ ಸಿಂಗಾರದ ಸರಮಾಲೆಯು ಹೆಬ್ಬಾಗಿಲಿಗೆ
ಬಯಲು - ಗೋಪುರ ಒಂದೂ ಅರಿಯದು
ಬಣ್ಣದ ಕಾಗದಗಳ ಪೋಣಿಸಿ ಮಾಡಿದ
ದಾರದ ಕೈಚಳಕದ ತೋರಣಕೆ;
ಈ ಸಡಗರ - ಸಂಭ್ರಮ ಎಂದೆಂದೂ ಕುಂದದೆ ಇರಲಿ,
ಎಲ್ಲರ ಮನಸಿಗೆ ಸುಖಃ ಶಾಂತಿಯ ನೆಮ್ಮದಿ ತರಲಿ,
ಆ ಭಗವಂತನ ನೆನಪು ಅಳಿಯದೆ ಉಳಿಯಲಿ ಎಲ್ಲರ ಮನದಲಿ,
ಮಾಡುವ ಕೆಲಸಕೆ ಜಯ ಸಿಗಲಿ....
-- ಪುಷ್ಪತಾರ ದೇವದಾಸ್ ಉಚ್ಚಿಲ್
ಮಂಗಳೂರು/ಬೆಂಗಳೂರು.
ಯಾರೂ ಮುಟ್ಟಿ ನೋಡದ ಗೋಡೆಗೆ ಬಣ್ಣದ ಅಪ್ಪುಗೆಯು,
ಎಲ್ಲಿಲ್ಲದ ಸಂಭ್ರಮ - ಸಡಗರ ಎಲ್ಲೆಡೆಯು;
ತಳಿರು - ತೋರಣಗಳ ಸಿಂಗಾರದ ಸರಮಾಲೆಯು ಹೆಬ್ಬಾಗಿಲಿಗೆ
ಬಯಲು - ಗೋಪುರ ಒಂದೂ ಅರಿಯದು
ಬಣ್ಣದ ಕಾಗದಗಳ ಪೋಣಿಸಿ ಮಾಡಿದ
ದಾರದ ಕೈಚಳಕದ ತೋರಣಕೆ;
ಈ ಸಡಗರ - ಸಂಭ್ರಮ ಎಂದೆಂದೂ ಕುಂದದೆ ಇರಲಿ,
ಎಲ್ಲರ ಮನಸಿಗೆ ಸುಖಃ ಶಾಂತಿಯ ನೆಮ್ಮದಿ ತರಲಿ,
ಆ ಭಗವಂತನ ನೆನಪು ಅಳಿಯದೆ ಉಳಿಯಲಿ ಎಲ್ಲರ ಮನದಲಿ,
ಮಾಡುವ ಕೆಲಸಕೆ ಜಯ ಸಿಗಲಿ....
-- ಪುಷ್ಪತಾರ ದೇವದಾಸ್ ಉಚ್ಚಿಲ್
ಮಂಗಳೂರು/ಬೆಂಗಳೂರು.
Wednesday, March 30, 2011
ಇಂದಿನ ದಿನ
ಮಂದಿಗೊಂದು ಮನೆ ಬಂದು
ಹಾದಿ ಬೀದಿ ಹಾಯಾಗಿ ತೆರೆದು ನಿಂತಿದೆ
ಗದ್ದೆ -ಹುಣಿ, ತೋಡು - ಹಳ್ಳ ಮರೆ ಮಾಚಿದೆ
ತೋಪು ತೋಟ ಎಲ್ಲ ಇಂದು ಪಾಲಾಗಿದೆ
ಮನೆಯಲ್ಲಿ ಶಾಂತಿ ನೆಮ್ಮದಿಗೆ ತೊಡಕಾಗಿದೆ
ಇದು ಇಂದಿನ ದಿನ ಎಂದು ಕೂಗಿ ಕರೆದಿದೆ
ಅದು ಅಂದಿನ ದಿನ ಕೂಡಿ ಬಾಳ್ವೆ ನಡೆದಿದೆ
ಕಾಲದ ಮಹಿಮೆ ಇದು, ಹೇಗೆ ಬದಲಾಗಿದೆ?!
-- ಪುಷ್ಪತಾರ ದೇವದಾಸ್ ಉಚ್ಚಿಲ್,
ಮಂಗಳೂರು/ಬೆಂಗಳೂರು.
ಹಾದಿ ಬೀದಿ ಹಾಯಾಗಿ ತೆರೆದು ನಿಂತಿದೆ
ಗದ್ದೆ -ಹುಣಿ, ತೋಡು - ಹಳ್ಳ ಮರೆ ಮಾಚಿದೆ
ತೋಪು ತೋಟ ಎಲ್ಲ ಇಂದು ಪಾಲಾಗಿದೆ
ಮನೆಯಲ್ಲಿ ಶಾಂತಿ ನೆಮ್ಮದಿಗೆ ತೊಡಕಾಗಿದೆ
ಇದು ಇಂದಿನ ದಿನ ಎಂದು ಕೂಗಿ ಕರೆದಿದೆ
ಅದು ಅಂದಿನ ದಿನ ಕೂಡಿ ಬಾಳ್ವೆ ನಡೆದಿದೆ
ಕಾಲದ ಮಹಿಮೆ ಇದು, ಹೇಗೆ ಬದಲಾಗಿದೆ?!
-- ಪುಷ್ಪತಾರ ದೇವದಾಸ್ ಉಚ್ಚಿಲ್,
ಮಂಗಳೂರು/ಬೆಂಗಳೂರು.
Thursday, June 17, 2010
ಧೈರ್ಯ
ಧೈರ್ಯದಿ ಅಸಾಧ್ಯವ ಸಾಧಿಸಬಹುದು
ಭಯವನು ದೂರಕೆ ಓಡಿಸ ಬಹುದು
ನೆರವಿಲ್ಲದೆ ಕೆಲಸವ ಮಾಡಲು ಬಹುದು
ಆನೆಯ ಬಲವನು ಪಡೆಯಲು ಬಹುದು
ಧೈರ್ಯವು ಎಲ್ಲರ ನೆರವಿಗೆ ಇರುವುದು
ಓದಿನ ಉನ್ನತಿಗೇರಲು ಸಹಕರಿಸುವುದು
ಛಲವನು ಬಿಡದೆ ಧೈರ್ಯವಗೆಡದೆ
ಗುರಿಯದು ತಲುಪುವುದು.
-- ಪುಷ್ಪತಾರ ದೇವದಾಸ್ ಉಚ್ಚಿಲ್
ಮಂಗಳೂರು
ಭಯವನು ದೂರಕೆ ಓಡಿಸ ಬಹುದು
ನೆರವಿಲ್ಲದೆ ಕೆಲಸವ ಮಾಡಲು ಬಹುದು
ಆನೆಯ ಬಲವನು ಪಡೆಯಲು ಬಹುದು
ಧೈರ್ಯವು ಎಲ್ಲರ ನೆರವಿಗೆ ಇರುವುದು
ಓದಿನ ಉನ್ನತಿಗೇರಲು ಸಹಕರಿಸುವುದು
ಛಲವನು ಬಿಡದೆ ಧೈರ್ಯವಗೆಡದೆ
ಗುರಿಯದು ತಲುಪುವುದು.
-- ಪುಷ್ಪತಾರ ದೇವದಾಸ್ ಉಚ್ಚಿಲ್
ಮಂಗಳೂರು
ಹೂವುಗಳು
ಬಣ್ಣ ಬಣ್ಣದ ಹೂವುಗಳೆಲ್ಲ,
ಅರಳಿವೆ ಗಿಡಮರಬಳ್ಳಿಗಳ ತುಂಬೆಲ್ಲ,
ಹೂವಿನ ಸೊಗಸು ಅದೆಷ್ಟು ಅಂದ ನೋಡಿದಲೆಲ್ಲ,
ಹೂವಿನಂತಹ ಮನಸ್ಸು ಅದೆಷ್ಟು ಕೋಮಲ!
ಹೂವಿನ ಮಕರಂದ ದುಂಬಿಗೆ ಆಹಾರ,
ದೇವರ ಗುಡಿಗೆ ಹೂವಿನ ಅಲಂಕಾರ,
ಹೆಣ್ಣಿನ ಮುಡಿಗೆ ಹೂವಿನ ಶೃಂಗಾರ.
ಭೂಮಾತೆಯ ಮಡಿಲಲ್ಲಿ ಹೂವಿನ ಹಂದರ,
ಇದುವೇ ಸ್ವಾರ್ಥರಹಿತ ಪ್ರಕೃತಿಯ ಶಾಶ್ವತ ಮಂದಿರ!
-- ಪುಷ್ಪತಾರ ದೇವದಾಸ್ ಉಚ್ಚಿಲ್
ಮಂಗಳೂರು.
ಅರಳಿವೆ ಗಿಡಮರಬಳ್ಳಿಗಳ ತುಂಬೆಲ್ಲ,
ಹೂವಿನ ಸೊಗಸು ಅದೆಷ್ಟು ಅಂದ ನೋಡಿದಲೆಲ್ಲ,
ಹೂವಿನಂತಹ ಮನಸ್ಸು ಅದೆಷ್ಟು ಕೋಮಲ!
ಹೂವಿನ ಮಕರಂದ ದುಂಬಿಗೆ ಆಹಾರ,
ದೇವರ ಗುಡಿಗೆ ಹೂವಿನ ಅಲಂಕಾರ,
ಹೆಣ್ಣಿನ ಮುಡಿಗೆ ಹೂವಿನ ಶೃಂಗಾರ.
ಭೂಮಾತೆಯ ಮಡಿಲಲ್ಲಿ ಹೂವಿನ ಹಂದರ,
ಇದುವೇ ಸ್ವಾರ್ಥರಹಿತ ಪ್ರಕೃತಿಯ ಶಾಶ್ವತ ಮಂದಿರ!
-- ಪುಷ್ಪತಾರ ದೇವದಾಸ್ ಉಚ್ಚಿಲ್
ಮಂಗಳೂರು.
Friday, September 25, 2009
ಮನೆ
ಮನೆಯೆಂದರೆ ಅದು ಹೀಗಿರಬೇಕು:
ಚಿಕ್ಕದಾಗಿದ್ದರೂ ಅದು ಚೊಕ್ಕವಿರಬೇಕು ,
ಮಕ್ಕಳ ಸ್ವರವೂ ಬೇಕು ಹಕ್ಕಿಗಳ ಇಂಚರದಂತೆ,
ಹಿರಿಯರ ಹಿತನುಡಿಗಳ ಸಾರ ಇಲ್ಲಿರಬೇಕು,
ಮನಸ್ಸಿರಬೇಕು ಗರಿಗೆದರಿದ ನವಿಲಿನಂತೆ.
ಮನೆಯೆಂದರೆ ಅದು ಹೀಗಿರಬೇಕು:
ಸಹಕಾರ ಮನೋಭಾವನೆಯು ಇಲ್ಲಿರ ಬೇಕು
ಪ್ರೀತಿಯ ಆಕಾರ ಕೊಡಬೇಕು ಎಲ್ಲರಿಗೂ ಮಕ್ಕಳಂತೆ,
ಎಂದಿಗೂ ಮನೆಮಂದಿಯ ವ್ಯವಹಾರದಲ್ಲಿ ಪಾಲ್ಗೊಳ್ಳಬೇಕು,
ನಮ್ಮ ವಿಹಾರವಿರಬೇಕು ಕ್ಷೇತ್ರದರ್ಶನದಂತೆ,
ಮನೆಯೆಂದರೆ ಅದು ಹೀಗಿರಬೇಕು:
ಇರಬಾರದು ಇಲ್ಲಿ ಮನಸ್ಸಿಗೆ ಬೇಸರ,
ಇದುವೇ ಸುಖಃ ದುಖಃದ ಸಮ್ಮಿಲನದ ಸಾಗರ,
ಸುಖಃ ಶಾಂತಿಗೆ ಮನೆಯೇ ಆಧಾರ,
ಮನೆಯೆಂದರೆ ಅದು ಹೀಗಿರಬೇಕು:
'HOME SWEET HOME'
-- ಪುಷ್ಪತಾರ ಡಿ ಉಚಿಲ
ಮಂಗಳೂರು
(ಜನ ಮನ ಕಾರ್ಯಕ್ರಮ ದಲ್ಲಿ ಪ್ರಸಾರವಾಗಿ ಬಹುಮಾನ ಗೆದ್ದ ಕವನ )
ಚಿಕ್ಕದಾಗಿದ್ದರೂ ಅದು ಚೊಕ್ಕವಿರಬೇಕು ,
ಮಕ್ಕಳ ಸ್ವರವೂ ಬೇಕು ಹಕ್ಕಿಗಳ ಇಂಚರದಂತೆ,
ಹಿರಿಯರ ಹಿತನುಡಿಗಳ ಸಾರ ಇಲ್ಲಿರಬೇಕು,
ಮನಸ್ಸಿರಬೇಕು ಗರಿಗೆದರಿದ ನವಿಲಿನಂತೆ.
ಮನೆಯೆಂದರೆ ಅದು ಹೀಗಿರಬೇಕು:
ಸಹಕಾರ ಮನೋಭಾವನೆಯು ಇಲ್ಲಿರ ಬೇಕು
ಪ್ರೀತಿಯ ಆಕಾರ ಕೊಡಬೇಕು ಎಲ್ಲರಿಗೂ ಮಕ್ಕಳಂತೆ,
ಎಂದಿಗೂ ಮನೆಮಂದಿಯ ವ್ಯವಹಾರದಲ್ಲಿ ಪಾಲ್ಗೊಳ್ಳಬೇಕು,
ನಮ್ಮ ವಿಹಾರವಿರಬೇಕು ಕ್ಷೇತ್ರದರ್ಶನದಂತೆ,
ಮನೆಯೆಂದರೆ ಅದು ಹೀಗಿರಬೇಕು:
ಇರಬಾರದು ಇಲ್ಲಿ ಮನಸ್ಸಿಗೆ ಬೇಸರ,
ಇದುವೇ ಸುಖಃ ದುಖಃದ ಸಮ್ಮಿಲನದ ಸಾಗರ,
ಸುಖಃ ಶಾಂತಿಗೆ ಮನೆಯೇ ಆಧಾರ,
ಮನೆಯೆಂದರೆ ಅದು ಹೀಗಿರಬೇಕು:
'HOME SWEET HOME'
-- ಪುಷ್ಪತಾರ ಡಿ ಉಚಿಲ
ಮಂಗಳೂರು
(ಜನ ಮನ ಕಾರ್ಯಕ್ರಮ ದಲ್ಲಿ ಪ್ರಸಾರವಾಗಿ ಬಹುಮಾನ ಗೆದ್ದ ಕವನ )
Subscribe to:
Posts (Atom)